Sunday 13 December, 2009

ತುಲು ಸಮ್ಮೇಲನೋಗ್ ಪೋತಾರ?

ಈ ಮಾಣಿಗೆ ಎಲ್ಯಾರು ಎಂತಾರು ಜೆಂಬ್ರ, ಅನಪತ್ಯ ಇದ್ದರೆ ಭಾರೀ ಸಂಭ್ರಮ... ಅಲ್ಲಿಗೊಂದಾರಿ ಹೋಯೆಕ್ಕು, ಚೆಂದ ನೋಡೆಕ್ಕು. ಮೊನ್ನೆ ಕಳ್ತದಾ ತುಳು ಸಮ್ಮೇಳನ, ಹೋಗಿತ್ತಿದ್ದೆ, ನಮ್ಮ ಪುಟ್ಟಕ್ಕಂದೇ ಕಾರ್ಬಾರಡ. ಸಮ್ಮೇಳನ ನಡಶುದೇ ಅದುವೇ ಹೇಳಿಗೊಂಡು ಇತ್ತು. ಎಂತಾ ಜೆನ ಎಂತಾ ಜೆನ.... ಕೆಲಾವು ಲಕ್ಶ ಕಳಿಗು. ಧೂಳೂ ಹೇಳಿರೆ ಧೂಳು. ಟೇಂಕರಿಲಿ ನೀರು ಬಿಟ್ಟೊಂಡಿತ್ತಿದ್ದವು. ಆದರುದೇ ಅವು ಅತ್ಲಾಗಿ ಎತ್ತುವಾಗ ಪುನಾ ಧೂಳು. ನಮ್ಮ ಗುಣಾಜೆ ಮಾಣಿಯ ಪ್ರೆಂಡು ಎಡ್ಯೂರಪ್ಪ ಬಂದಿತ್ತಿದ್ದನಡ ಉದ್ಘಾಟನಗೆ. ಆನು ಎತ್ತುವಾಗ ರಜಾ ಲೇಟ್ ಆಯಿದು.

ಆದರೆ ವೆವಸ್ತೆ ಮಾತ್ರ ತುಂಬಾ ಲಾಯಿಕ್ಕ ಆಯಿದು. ಐವತ್ತು ಸಾವಿರ ಜೆನ ಏಕ ಕಾಲಕ್ಕೆ ಉಂಬಶ್ಟು ದೊಡ್ಡ ಊಟದ ಚೆಪ್ಪರ. ಅದರ್ಲಿ ಬಪ್ಪೆ ವೆವಸ್ತೆ. ಹಾಳೆ ಬಟ್ಳು. ಅಶನ, ಸಾರು ಕೊದಿಲು, ಒಂದು ಪಾಯಿಸ, ಒಂದು ಸ್ವೀಟು. ಊಟ ಕಂಡ್ರೆ ಮಾಣಿ ಬಿಡ್ತನಾ? ಎಂತಾ ಊಟ ಭಾವ.... ಭಾರೀ ಲಾಯ್ಕ ಹೇಳಿರೆ ಭಾರೀ ಲಾಯ್ಕ ಇತ್ತು ಊಟ. (ಪುಟ್ಟಕ್ಕನ ಅಡಿಗೆಂದಲೂ ;-) )

ಮತ್ತೆ ಅಲ್ಲೇ ಮುಂದೆ ಹೋದರೆ ತುಳು ಗ್ರಾಮ ಹೇಳಿ, ಒಂದು ಕೃತಕ ಗ್ರಾಮ ನಿರ್ಮಾಣ ಮಾಡಿತ್ತಿದ್ದವು. ಒಂದೈವತ್ತು ಎಕ್ರೆ ಜಾಗೆಲಿ ತುಳು ಸಂಸ್ಕೃತಿಯ ಲೋಕ. ಬೂತಸ್ತಾನ, ದೇವರ ಕಟ್ಟೆ, ನಾಗ ಬನ, ಬೇರೆ ಬೇರೆ ಜಾತಿಯ ಜೆನಂಗಳ ಮನಗೊ, ನಲಿಕ್ಕೆಯೊವು, ಬಟ್ಟಕ್ಕೊ, ಗೌಡುಗೊ, ಪೂಜಾರಿಗೊ, ಪುರ್ಬುಗೊ, ಬ್ಯಾರಿಗೊ, ಹೀಂಗೆ. ಬರೀ ಮನೆ ಮಾಂತ್ರ ಅಲ್ಲ, ಅದರ್ಲಿ ಜೆನಂಗೊ ಕೂಡ ಇತ್ತಿದ್ದವು, ಅವರವರ್ ಜಾತಿಯ ಕೆಲಸ ಮಾಡ್ತಾ. ನಲಿಕೆಯೊವು ಒಲಿ ಕೆರಸುದು, ಬೂತ ಕಟ್ಟುವ ಸಾಮಾಗ್ರಿ ಜೋಡುಸುದು, ಪಟ್ಲೇರ್ ಪಂಚಾತಿಗೆ ನಡೆಶುದು, ಸೇನೇರ್ ಲೆಕ್ಕ ಬರವದು, ಉಗ್ರಾಣಿ ಚೈನು ಮಡುಸುದು, ಪಂಡಿತ ಸೊಪ್ಪು ನುರಿವದು, ಜೋಯಿಶ ಕವಡೆ ಹರಗುದು, ಇತ್ಯಾದಿ. ಹಾಂಗೆಯೆ ಅಂಗ್ಡಿಗೊ ಕೂಡ ಇತ್ತು. ಸುರೂವಿಂಗೆ ಕಮ್ತೆರೆನ ಅಂಗಡಿ. ಅಕ್ಕಿ ಬೆಲ್ಲ ಸಾಮಾನು. ಸೇರು ಲೆಕ್ಕಲ್ಲಿ ಮಾರಾಟ. ಒಂದು ಬಡ್ಡ ಕೊಂಕಣಿಯ ಎಲ್ಲಿಂದ ತಂದವೋ ಗೊಂತಿಲ್ಲೆ. ಟಿಪಿಕಲ್ ಕಾಮತ್ತಿನ ತೈಂದವು. ಮತ್ತೆ ಹೋಟ್ಳು, ಅದರ್ಲಿ ರೇಡಿಯ, ಭಜನಾ ಮಂದಿರ, ಸೋಡದ ಅಂಗಡಿ- ಭಾರೀ ಅಪರೂಪ ಆಗಿಪ್ಪ ಗೋಳಿ ಸೋಡ. ಸಣ್ಣಾದಿಪ್ಪಾಗ ಕುಡುದ ನೆಂಪು. ಕೈಮಗ್ಗ, ಅವಲಕ್ಕಿ ಲಾಟೆ, ದೇವಸ್ತಾನ, ಕಟ್ಟೆ, ಬೇತಾಳ, ನೇಮ, ಪೋಶ್ಟಾಪೀಸು, ಹಳೇ ಟೆಲಿಗ್ರಾಫು ಮಿಶನು, ಗಾಣಂಗೊ, ಎಣ್ಣೆ ತೆಗವದು, ಕಬ್ಬು ಅರವದು, ಫ಼್ರೆಶ್ ಕಬ್ಬಿನ ಜೂಸು, ಲಟ್ಟಣಿಗೆ ಮಾಡುದು- ಒಂದು ತೆಕ್ಕೊಂಡೆ , ಮುಂದಂಗೆ ಬೇಕಕ್ಕು ಹೇಳಿ. ಒಪ್ಪಣ್ಣ ಒಂದು ಕೈಕ್ಕುರುವೆ ತೆಕ್ಕೊಂಡ ಅಡಕ್ಕೆ ಹೆರ್ಕುತ್ತ ಹಾಂಗಿಪ್ಪದು. ಬೆಂಗ್ಳೂರಿಂಗೆ ತೆಕ್ಕೊಂಡೋಯಿದ. ಮೋರ್ ಂಗೆ ಶೋಪ್ಪಿಂಗ್ ಹೋಪಲೆಯಡ. ಅಲ್ಲಿ ಒಂದು ಹೊಸ ಟ್ರೆಂಡ್ ಸುರು ಮಾಡುವ ಅಂದಾಜಿಲಿದ್ದ. ಇಶ್ಟೆಲ್ಲ ಇದ್ದರೂ ಒಂದು ಸಂಗತಿ ಕಂಡತ್ತಿಲ್ಲೆ ಭಾವಾ... ತುಳು ಗ್ರಾಮಂಗಳಲ್ಲಿ ಮುಖ್ಯವಾಗಿ ಒಂದು ಗಡಂಗು ಇಲ್ಲದ್ರೆ ಅದು ಗ್ರಾಮವೊ?

ಅದಾ ಮುಖ್ಯ ವಿಚಾರವೇ ಮರತ್ತದಾ. ಅಟ್ಟಿಲ್-ಅರಗಣೆ ಹೇಳಿ ಆಹಾರ ಮೇಳ. ಒಂದುರೂಪಾಯಿಗೆ ಹಾಳೆ ಪ್ಲೇಟು, ಐದು ರುಪಾಯಿಯ ಕೂಪನುಗೊ. ತೆಕ್ಕೊಂಡು ಕೌಂಟರುಗಳ ಹತ್ತರೆ ಹೋಗಿ ಬೇಕಾದ್ದು ತೆಕ್ಕೋಂಬಲೆ. ಸುಕ್ರುಂಡೆ, ಸುಟ್ಟವು, ಒಡೆ, (ತಿಥಿಗಿಪ್ಪದಲ್ಲಾ... ಹ್ಹೆ ಹ್ಹೆ...) ಅವಲಕ್ಕಿ, ತಿಮರೆ ಚಟ್ನಿ, ಪುಂಡಿಗಸಿ, ಇಡ್ಲಿ ಸಾಂಬಾರು, ಶಿವಳ್ಯೋರ ಮಡ್ಡಿ, ಸೇಮಗೆ ಕಾಯೆಲು, ಚರ್ಮುರಿ, ಹಾಲಿಟ್ಟು ಪಾಯಿಸ, ಅರಿಶಿನ ಎಲೆಲಿ ಮಾಡಿದ ಕೊಟ್ಟಿಗೆ, ಗೆಣಸಲೆ, ಎಳ್ಳು ಜೂಸು, ರಾಗಿ ಜೂಸು, ಅಪ್ಪ, (ಅಮ್ಮ ಇಲ್ಲೆ) ಆಹಾ... ಎಷ್ಟೊಂದು ಬಗೆ... ಮಾಣಿಗೆ ಆಶೆ ತಡೆಯ... ಎಂತಮಾಡುದು, ತಿಂಬಲೆ ಪುಟ್ಟಕ್ಕನ ಹೆದರಿಕೆ. ಕಾಟಂಗೋಟಿ ತಿನ್ನೆಡ ಹೇಳಿತ್ತಿದ್ದು. ಗೊಂತಾದರೆ ಗ್ರಾಚಾರ ಬಿಡ್ಸುಗು.

ವಸ್ತು ಪ್ರದರ್ಶನ ಕೂಡ ಇತ್ತು. ಭಾರೀ ಚೆಂದ ಇತ್ತಡ. ಮಾಣಿಗೆ ಅದರ್ಲೆಲ್ಲ ಇಂಟ್ರೆಶ್ಟಿಲ್ಲೆ. ಡೇನ್ಸು, ಮೇಜಿಕ್ಕು, ಆಟ, ನಾಟಕ, ನೇಮ, ಕೂಸುಗೊ, ಹೀಂಗಿಪ್ಪದರೆಲ್ಲಾ ನೋಡುದರ್ಲೇ ಕೊಶಿ.

ಎಂತದೇ ಹೇಳಿ. ಖರ್ಚು ಹತ್ತು ಕೋಟಿ ದಾಂಟಿರೂ ಕೆಲಸ ಭಾರೀ ಲಾಯಿಕ ಮಾಡಿತ್ತಿದ್ದವು. ತುಳುನಾಡಿನ ಸಂಸ್ಕೃತಿಯ ಪರಿಚಯ ಮಾಡ್ಸಿಕೊಡ್ತ ಪ್ರತಿಯೊಂದು ವಿಶಯಂಗಳೂ ಅಲ್ಲಿತ್ತು. ಸಂಸ್ಕೃತಿ ಅನಾಥ ಅಪ್ಪ ಕಾಲಲ್ಲಿ ಹೀಂಗಿಪ್ಪದೊಂದು ಜಾತ್ರೆ ಬೇಕಾವುತ್ತು. ನಾವು ಎಂತರ ಹೇಳಿ ನವಗೆ ನಾವೇ ನೆಂಪು ಮಾಡ್ಸಿಗೊಂಬಲೆ. ಎಂತ ಹೇಳ್ತಿ ಭಾವ?

Sunday 11 October, 2009

ಬೆಳುಗುಲ್ಲ ಮೊಟ್ಟೆಲಿ ಶ್ಟೆಪ್ಲರು ಪಿನ್ನು ಹುಡ್ಕಿದ ಕತೆ

ಮೊನ್ನೆ , ಶುಕ್ರವಾರ ಫೋನು ಮಾಡಿದವು ನಮ್ಮ ಕೃಷ್ಣ ಕುಮಾರ ಸರ್. ಕುದುರೆಮುಖಕ್ಕೆ ಹೋಪಲಿದ್ದು, ಬತ್ತೆಯ ಮಾಣಿ ಸಂಗಾತಕ್ಕೆ ಹೇಳಿಗೊಂಡು. ಅವು ಆರು ಗೊಂತಾತೊ? ಅದೇ ನಮ್ಮ ಸಾರಡಿ ತೋಡಿಲೇ ಒಂದು ಒಂದೂವರೆ ಮೈಲು ಮೇಗಂತಾಗಿ ಹೋದರೆ ಗುಳಿಮನೆ ಹೇಳಿ ಇದ್ದನ್ನೆ, ಅಲ್ಲೆ ಇಪ್ಪದು. ಅವು ಈಗ ಕೊಡೆಯಾಲದ ದೊಡ್ಡ ಕೋಲೇಜಿಲಿ ಪ್ರೊಫೆಸರ್ ಅಡ. ನಮ್ಮ ಒಪ್ಪಣ್ಣ ಮದಲಿಂಗೆ ಕೋಲೇಜಿಂಗೆ ಹೋಪಗ ಕಂಡು ಗೊಂತಿಕ್ಕು ಅವರ. ಗೆಡ್ಡ ರಜಾ ಇಪ್ಪ ಮಾಷ್ಟ್ರ.

ಹಾಂಗೆ ಹೆರಟತ್ತದಾ ನಾವುದೇ. ಹೇಂಗೂ ಕೆಮ್ಕಕ್ಕೆ ರಜೆ. ಮನೆಲಿ ಆಳುಗೊ ಕೂಡಾ ಇಲ್ಲೆ. ಗೋಂದೋಳು ಅಡ ಆ ನಾಯ್ಕನಲ್ಲಿ. ನಮ್ಮ ಬೈಕ್ಕಿಲೇ ಹೋದ್ದದು. ಕೊಡೆಯಾಲಾಗಿ ಮೂಡಬಿದ್ರೆಯಾಗಿ ಬಜಗೋಳಿಯಾಗಿ ಕುದ್ರೆಮುಖ. ಎಂತಾ ಲಾಯ್ಕ ಮಾರ್ಗ ಗೊಂತಿದ್ದಾ? ಆಹಾ.... ನಮ್ಮ ಪುಟ್ಟಕ್ಕನ ಕೆಪ್ಪಟೆಯ ಹಾಂಗೆ... ಭಾರೀ ನೈಸು.

ವಿಶಯಕ್ಕೆ ಬಪ್ಪ... ಹೋದ್ದದು ಎಂತಕೆ ಹೇಳಿತ್ತು ಕಂಡ್ರೆ, ಮಾಷ್ಟ್ರಿಂಗೆ ಒಂದು ಸೆಸಿ ಹುಡ್ಕುಲೆ. ಆ ಸೆಸಿ ಇಷ್ಟ್ರವರೆಗೆ ಆರೂ ನೋಡದ್ದ ಸೆಸಿಯಡ. ಸಸ್ಯ ಪ್ರಪಂಚಕ್ಕೇ ಹೊಸತ್ತಡ. ಭರ್ತಿ ಒಂದೂವರೆ ಇಂಚು ಉದ್ದವೂ, ಒಂದು ಹಿಡಿಸೂಡಿ ಕಡ್ಡಿಯಷ್ಟಕ್ಕೆ ತೋರವೂ ಇಪ್ಪ, ಎಲೆ ಗೆಲ್ಲು ಹೂಗು ಎಂತದೂ ಇಲ್ಲದ್ದ ಒಂದು ಸೆಸಿ. ಅಂದು ಐದಾರು ಒರ್ಶ ಹಿಂದೆ ಒಂದಾರಿ ಹೋಗಿಪ್ಪಗ ಕಂಡದಡ ಅವು ಅದರ. ನಂತರ ಪುಸ್ತಕಂಗಳಲ್ಲಿ ಹುಡ್ಕುವಾಗ ಅದರ ಬಗ್ಗೆ ಏವದೇ ವಿವರ ಸಿಕ್ಕಿದ್ದಿಲ್ಲೆಡ. ಹಾಂಗಾಗಿ ಅವು ಅದರ ಬಗ್ಗೆ ಇಂಟ್ರೆಷ್ಟು ತೆಕ್ಕೊಂಡು ಪ್ರತೀ ಒರ್ಶವೂ ಈ ಸೀಸನಿಲಿ ಹೋಗಿ ನೋಡ್ತಾ ಇಪ್ಪದು. ಅದು ಸಿಕ್ಕಿರೆ ಸಸ್ಯ ವಿಜ್ನಾನ ಪ್ರಪಂಚಲ್ಲಿ ಅವರ ಹೆಸರು ಎತ್ತರಕ್ಕೆ ಹೋವ್ತು, ಅದರೊಟ್ಟಿಂಗೆ ಮಾಣಿಯ ಹೆಸರೂ ಬಕ್ಕು ಹೇಳಿ ಒಂದು ಆಶೆ ಇದಾ... ಹ್ಹೆ ಹ್ಹೆ ಹ್ಹೆ...


ಕುದ್ರೆಮುಖ ಚರ್ಚಿನ ಹಿಂದೆ ಇಪ್ಪ ಶೋಲಾ ಕಾಡಿಲಿ ಇಳುದು ಹುಡ್ಕುವ ಕೆಲಸ... ಇದೆಂತರ ಪಿಲ್ಮಿನ ಹೆಸರು ಹೇಳಿ ಕನ್ಪ್ಯೂಸು ಆಯಿಕ್ಕೆಡಿ. ಶೋಲಾ ಹೇಳಿರೆ ಎರಡು ಗುಡ್ಡಗ ಜೋಯಿಂಟ್ ಅಪ್ಪ ಜಾಗೆಲಿ ಬೆಳದಿಪ್ಪ ಸಪೂರದ ಕಾಡು, ಅದರ ನಡೂಕೆ ಸಪೂರದ ನೀರ ತೋಡು ಇರ್ತು.. ಚಿತ್ರಲ್ಲಿ ನೋಡಿ.(ಪರ್ವತ ಯೋನಿ ಹೇಳಿ ಅದಕ್ಕೆ ಸಂಸ್ಕೃತಲ್ಲಿ ಹೇಳ್ತವಡ. ಎನಗೆ ಒಪ್ಪಣ್ಣ ಹೇಳಿದ್ದು) ಆ ಕಾಡು ಬರೇ ಹತ್ತನ್ನೆರಡು ಮೀಟರು ಅಗಲ ಇದ್ದರೂ ಅಲ್ಲಿಪ್ಪ ಕಾಡು, ಪೊದೆ, ಮರ, ಬಳ್ಳಿ, ಗೆಡು, ಹುಲ್ಲು ಹೇಂಗೆ ಬೆಳದಿರ್ತು ಹೇಳಿದರೆ ಅದರ ಒಳಂಗೆ ಹೊಗ್ಗೆಕಾರೇ ಸುಮಾರು ಹೊತ್ತು ಆಯಿದು. ಬಗ್ಗಿ ಮನುಗಿದ ಹಾಂಗೆ ಮಾಡಿ ಹರಕ್ಕೊಂಡು ಎರಡೂ ಕೈಲಿ ಬಲ್ಲೆ ಪೊದೆ ಒಂದುಸಿಗೊಂಡು ನೀರಿಲಿ ಮೀಂದಿದ ಹಾಂಗೆ ಮಾಡಿಗೊಂಡು ಒಳ ನುಗ್ಗೆಕ್ಕಾರೆ ಸಾಧಾರಣ ಹತ್ತು ವರ್ಷ ಹಿಂದೆ ಕಲ್ತ ಮಂತ್ರಂಗೊ ಎಲ್ಲಾ ಬಾಯಿಲಿ ಬಪ್ಪಲೆ ಸುರು ಆಯಿದು.

ಉಂಬುರುದೇ ಇತ್ತು ಮಾರಾಯ ಅಲ್ಲಿ, ಎನ್ನ ಕಾಲು ಪೂರಾ ಲಗಾಡಿ. ಅವು ಹತ್ತಿದರೆ ಗೊಂತೇ ಆವ್ತಿಲ್ಲೆ. ತಣ್ಣಂಗೆ ಸಣ್ಣ ಹುಳುಗೊ... ಗೊಂತಿಕ್ಕಲ್ದಾ ಉಂಬುರು/ಉಂಬುಳು/ಲೀಚ್ ಹೇಳಿರೆ. ನೆತ್ತರು ಹೀರ್ತ ಹುಳುಗೊ. ಕಚ್ಚಿದರೆ ಬಿಡ್ತವೇ ಇಲ್ಲೆ. ಈಚ ಬೆರಳಿಂದ ಆಚ ಬೆರಳಿಂಗೆ, ಅಲ್ಲಿಂದ ಇಲ್ಲಿಗೆ, ಅಂತೂ ತೊಲಗವು. ಅವು ನೆತ್ತರು ಕುಡುದು ಸುಮ್ಮನೆ ಇರ್ತವಾ? ಹಾಳು ಕೂಡಾ ಮಾಡ್ತವು. ಅವು ಕಚ್ಚಿದ ಜಾಗೆಲಿ ನೆತ್ತರು ಕಟ್ಟುತ್ತಿಲ್ಲೆ, ಹೋವ್ತಾ ಇರ್ತು. ಅದೆಂತದೋ ಎನ್ಜೈಮ್ ಅಡ. ಬ್ಲಡ್ ಕ್ಲೊಟ್ ಆಗದ್ದ ಹಾಂಗೆ ಮಾಡ್ತದು. ಮದ್ದಿಂಗೂ ಉಪಯೋಗ್ಸುತ್ತವಡ ಉಂಬುರುಗಳ, ನಮ್ಮ ಮಿಂಚುಳ್ಳಿ ಅಕ್ಕನತ್ತರೆ ಕೇಳಿರೆ ಹೇಳುಗು, ಅದಕ್ಕೆ ಆಯುರ್ವೇದ ಎಲ್ಲಾ ರಜ ರಜ ಗೊಂತಿದ್ದಡ. ಅಂತೂ ನೆತ್ತರು ಅರಿಶಿಗೊಂಡು ಹುಡ್ಕಿದೆಯೋ.


ಆದರೆ ಅದರ ಹುಡ್ಕುತ್ತ ಕಶ್ಟ ಮಾತ್ರ ಎನ್ನ ಅಜ್ಜಂಗೂ ಬೇಡ ಮಾರಾಯಾ... ಪುಟ್ಟಕ್ಕನ ತಲೆಂದ ಹೇನು ಹುಡ್ಕಿದ ಹಾಂಗೆ ಹುಡ್ಕಿದೆಯೋ, ಮೂರೂವರೆ ಗಂಟೆ ಹೊತ್ತು. ನಯಾ ಪೈಸೆ ಪ್ರೇಜನ ಆಯಿದಿಲ್ಲೆ :-( (ಪುಟ್ಟಕ್ಕ ಎನಗೆ ಬಡಿವದು ಬೇಡ, ಹೇನಿಲ್ಲೆ ಹೇಳಿ ಅರ್ತ) ಮತ್ತೆ ಅಂತೆಯಾ ಮಾಡಿದ್ದು ಹಿರಿಯೋರು ಗಾದೆ... ಬೆಳುಗುಲ್ಲ ಮೊಟ್ಟೆಲಿ ಅದೆಂತದೋ ಹುಡ್ಕಿದ ಹಾಂಗೆ ಹೇಳಿ?

ಹಾಂಗೆ ಹೋಗಿಪ್ಪಗ ಅಂತೇ ಬಪ್ಪಲಾವ್ತಾ? ಅಲ್ಲಿ ಸುತ್ತಮುತ್ತ ನೋಡೆಕ್ಕಿದಾ, ಮಾಣಿಗೆ ಹೊಸತ್ತಲ್ದಾ? ಹಾಂಗೆ ಕರಕ್ಕೊಂಡು ಹೋದವು ಅಲ್ಲೇ ಮುಂದೆ ನೆಲ್ಲಿಬೀಡು ಹೇಳ್ತಲ್ಲಿಂಗೆ, ಮೈನಿಂಗ್ ಅಪ್ಪ ಜಾಗಗೆ, ಪಾರ್ಕಿಂಗೆ, ಹಾಂ... ಮತ್ತೆ ಅಲ್ಲಿ ಒಂದು ಡ್ಯಾಂ ಇದ್ದು, ಅಣೆಕ್ಕಟ್ಟ. ಅಬ್ಬಾ... ಎಷ್ಟು ದೊಡ್ಡ ಇದ್ದು ಗೊಂತಿದ್ದಾ? ನಮ್ಮ ಸಾರಡಿ ತೋಡಿನ ಕಟ್ಟ ಏವ ಮೂಲಗೂ ಇಲ್ಲೆ ಅದರ ಎದುರು. ಅದರ ಹೆಸರು ಲಕ್ಯಾ ಡ್ಯಾಂ ಹೇಳಿ. ಪೊಲ್ಯುಷನ್ ಕಂಟ್ರೋಲ್ ಡ್ಯಾಂ, ಹೇಳಿರೆ ಮಾಲಿನ್ಯ ಆಗದ್ದಹಾಂಗೆ ತಡವ ಕಟ್ಟ. ಅದರ್ಲಿ ತುಂಬಾ ಮಣ್ಣೇ ಕಾಂಬದು. ಅಣೆಕಟ್ಟ ಹೇಳಿರೆ ನವಗೆ ನೆಂಪಪ್ಪದು ನೀರು ತುಂಬಿ ತುಳುಂಕುವ ಕಟ್ಟ ಅಲ್ದಾ? ಚಿತ್ರ ನೋಡಿ... ಬರೇ ಮಣ್ಣು ತುಂಬಿ ಕ್ರಿಕೇಟು ಮೈದಾನ ಆದ ಕಟ್ಟ. ಗಣಿಗಾರಿಕೆಯ ಕೆಸರು ಕೆಳ ಹೋಗದ್ದ ಹಾಂಗೆ ತಡವಲಿಪ್ಪ ಕಟ್ಟ ಹೇಳಿ ಕಾಣ್ತು ಅದು. ಪಟ ತೆಗೆಯುವುದು ನಿಷೇಧಿಸಲಾಗಿದೆ ಹೇಳಿದವು ಅಲ್ಲಿಪ್ಪ ಮೂಡ್ಲಾಗಿಂದ ಬಂದ ಹಿಂದಿ ಮಾತಾಡ್ತ ಗಾರ್ಡುಗೊ. ಆದರೆ ನಿಂಗೊಗೆ ಗೊಂತಿದ್ದನ್ನೆ, ಕೆಮರ ಬಿಟ್ಟರೆ ಮಾಣಿ ಮರ ಬಿಟ್ಟ ಮಂಗನ ಹಾಂಗೆ ಆವ್ತ ಹೇಳಿ... ಹ್ಹೆ ಹ್ಹೆ ಹ್ಹೆ.

ನಾವು ಬದ್ಕಿಪ್ಪದೇ ಪರಿಸರಂದಾಗಿ. ನಿಜವಾಗಿ ಅದರ ಒಳಿಶಿಗೊಂಡು ಉಪಯೋಗ್ಸಿಗೊಂಡು ಪೂರಕವಾಗಿ ಜೀವನ ಮಾಡೆಕ್ಕಾದ್ದು ಕ್ರಮ. ದುರಾಸೆಂದಾಗಿ ನಾವು ಅದರ ಕೊಂದು, ತಿಂದು ಜೀವನ ಮಾಡ್ತಾ ಇದ್ದು. ಪೈಸಗೆ ಬೇಕಾಗಿ ಜೀವ ಕೊಟ್ಟ ಅಬ್ಬೆಯನ್ನೂ ಮಾರುವ ಬುದ್ದಿ. ಮಾಣಿ ಉದಾಸನ ಅಪ್ಪಗ ಒಂದೋಂದರಿ ಹೇಳುದಿದ್ದು ಪುಟ್ಟಕ್ಕನತ್ತರೆ, ಈ ಪ್ರಪಂಚಲ್ಲಿ ಆರಿಂಗೂ ಉಪಯೊಗ ಇಲ್ಲದ್ದ ಮತ್ತು ಪ್ರತಿಯೊಂದು ಜೀವರಾಶಿಗೂ ಪರಿಸರಕ್ಕೂ, ಚರಾಚರ ವಸ್ತುಗೊಕ್ಕೂ ತೊಂದರೆ ಮಾತ್ರ ಕೊಡುವ ಜೀವಿ ಹೇಳಿ ಒಂದಿದ್ದರೆ ಅದು ಮನುಶ್ಯ ಮಾಂತ್ರ ಹೇಳಿ. ಆಲೋಚನೆ ಮಾಡಿ ನಿಂಗಳೇ, ಮನುಶ್ಯ ಈ ಪ್ರಪಂಚಂದ ಮಾಯ ಆಗಿ ಹೋದರೆ ಪರಿಸರದ ಆಗು ಹೋಗುಗೊಕ್ಕೆ ಯೇವದೇ ತೊಂದರೆ ಇಲ್ಲೆ(ಫುಡ್ ಚೈನ್, ಬಯೋಲೋಜಿಕಲ್ ಲಿಂಕ್ಸ್), ಮನುಶ್ಯ ಇದ್ದರೇ ತೊಂದರೆ.

ಕುದುರೆಮುಖದ ಅವಸ್ತೆ ಗೊಂತಿದ್ದನ್ನೆ ನಿಂಗೊಗೆಲ್ಲಾ, ಆ ಗಣಿಗಾರಿಕೆ, ಮಾಲಿನ್ಯ, ಧೂಳು, ಪರಿಸರ ನಾಶ, ಇತ್ಯಾದಿ ಇತ್ಯಾದಿ. ಏವ ದೇವರು ಬುದ್ದಿ ಕೊಟ್ಟದೋ ಗೊಂತಿಲ್ಲೆ. ಈಗ ಅದೆಲ್ಲಾ ನಿಂದಿದು. ನಿಧಾನಕ್ಕೆ ವನದೇವತೆಯ ಗಾಯ ಕೂಡಿಗೊಂಡು ಬತ್ತಾ ಇದ್ದು. ಅಲ್ಲಲ್ಲಿ ಹಸುರು ಹುಲ್ಲು ಬೆಳೆತ್ತಾ ಇದ್ದು ಗಣಿಗ ಇತ್ತ ಜಾಗೆಲಿ.

ನಾವೆಲ್ಲಾ ಇನ್ನೂ ಕಲಿವದು ಬಾಕಿ ಇದ್ದು.

Sunday 30 August, 2009

ಪಿಲ್ಮಿಲಿ ನಮ್ಮ ಜೀವನ ಕಾಣ್ತಾ?

...ಹಾಂಗೆ ಮಾಣಿಗೆ ಟ್ರಾನ್ಸ್‌ಫರ್ ಆತು. ಮಾಣಿಯ ಮನೆ ಹತ್ತರೆ ಹೇಳಿ ಆ ಜೀಯೆಮ್ಮಿಂಗೆ ಆರು ಕುತ್ತಿಕೊಟ್ಟದೋ ಎನಗಂತೂ ಗೊಂತಿಲ್ಲೆ. ಬಾಣಲೆಂದ ಸೀದ ಹೋಗಿ ಒಲಗೆ. ಕೊಡೆಯಾಲಂದ ಇಡುಕ್ಕಿದವು ನೆಲ್ಯಾಡಿಗೆ. ಕೊಡೆಯಾಲಲ್ಲಿ ಒಂದು ತರದ ಕಷ್ಟ ಆದರೆ ನೆಲ್ಯಾಡಿಲಿ ಇನ್ನೊಂದು ತರ.
ಹುಂ. ಅಪ್ಪದೆಲ್ಲಾ ಒಳ್ಳೆದಕ್ಕೆ, ಎಂತ ಹೇಳಿ ಕೇಳ್ತಿರೊ? ಮಾಣಿಯ ಮನೆಲಿ ಪಾಲಾತು. ಮನೆಗೆ ಆಚಕರೆ ಹೇಳಿ ಹೇಂಗೆ ಹೆಸರು ಬಂದದು ಹೇಳಿ ಗೊಂತಿಕ್ಕು ನಿಂಗೊಗೆ.( ಒಪ್ಪಣ್ಣನ ಬ್ಲೋಗಿಲಿ ಓದಿಪ್ಪಿ.) ಮೊದಲು ಆಚಕರೆ ಹೇಳಿ ಹೇಳಿಗೊಂಡಿತ್ತ ಮನೆ ಈಗ ಈಚಕರೆ ಹೇಳುವ ಹಾಂಗಾಯ್ದು (ಎಂಗೊಗೆ ಈಚಕರೆಯ ಹಳೆ ಮನೆ, ಅಪ್ಪಚ್ಚಿಗೆ ಆಚಕರೆಲಿ ಹೊಸಮನೆ). ಆಚಕರೆ ಈಚಕರೆ ಆದಪ್ಪಗ ಈಚಕರೆಗೆ ಇದ್ದ ಆಚಕರೆ ಹೇಳುವ ಹೆಸರಿಂಗೆ ಎಂತ ಮಾಡುದು? ಹಾಂಗೆ ಹೇಳಿ ಆಚಕರೆ ಮಾಣಿ 'ಈಚಕರೆ ಮಾಣಿ' ಹೇಳಿ ಆಂಯಿದಾಯಿಲ್ಲೆ. ಬಿಡಿ., ವಿಷಯಕ್ಕೆ ಬಪ್ಪ.
ಈಗ ಮನೆಲಿ ಅಪ್ಪ, ಅಮ್ಮ, ಅಜ್ಜಿ ಮಾತ್ರ ಪಾಲಿಂಗೆ ಸಿಕ್ಕಿದ್ದು ! ಈ ಪರಬ್ಬಂಗೊ ಮಾತ್ರ ಎಂತ ಮಾಡ್ಲೆಡಿಗು? ಹಾಂಗಾಗಿ ಮಾಣಿ ಮನೆಂದ ಹೋಗಿ ಬಪ್ಪದು ಒಳ್ಳೆದೇ! ಈ ಎಲ್ಲಾ ಗಲಾಟೆಲಿ ಪುರ್ಸೊತ್ತೇ ಆಯಿದಿಲ್ಲೆ ಇದಾ...
ಈಗ ಪುರುಸೊತ್ತು ಸಿಕ್ಕಿತ್ತದ ನಿಂಗಳತ್ರೆ ಮಾತಾಡ್ಲೆ ! ಒಪ್ಪಣ್ಣ ಬಯ್ಕೊಂಡಿತ್ತಿದ್ದ. 'ಎಲ್ಲಿ ಓಡಿ ಹೋದ ಈ ಮಾಣಿ' ಹೇಳಿಗೊಂಡು. ಅವಂಗೆಂತ ಗೊಂತು. ಓಡಿ ಹೋದರೆ ಪುಟ್ಟಕ್ಕ ಜೀವಲ್ಲಿ ಬಿಡ ಹೇಳಿ ! ಹ್ಹೆ. ಹ್ಹೆ.
ಹೇಳ್ತ ಹಾಂಗೆ ಒಂದು ಪಿಲ್ಮು ನೋಡಿದೆ. ಮಾಣಿಗೆ ಪಿಚ್ಚರಿನ ಮರ್ಲು ಒಂಚೂರೂ ಇಲ್ಲೆ. ಎಲ್ಲಾ ಈ ಪುಟ್ಟಕ್ಕನ ಒತ್ತಾಯಕ್ಕೆ. ಎಂತದೋ 'ಕಮೀನೇ' ಅಡ. ಎಂತರ ಅರ್ಥ ಹೇಳಿ ಅದರತ್ರೆ ಕೇಳುವ ಧೈರ್ಯ ಮಾಡಿದ್ದಿಲ್ಲೆ. ಬಪ್ಪಗ ಪೃಷ್ಠ ರಕ್ಷಕ ಕವಚ ( ಅದೇ ಒಪ್ಪಣ್ಣನ ತೋಟದ ಹಾಳೆ !) ಮರತ್ತು ಬೈಂದೆ. ಆದರೆ ಪಿಲ್ಮು ಲಾಯ್ಕಿತ್ತು. ಆರೋ ವಿಶಾಲ ಭಾರದ್ವಾಜನ ಪಿಲ್ಮಡ.. ಅದೇ ನಮ್ಮ ಸಾರಡಿ ತೋಡಿಂದ ಮೂರುವರೆ ಮೈಲು ಮೇಗಂತಾಗಿ ಇತ್ತಿದ್ದವು ಮದಲಿಂಗೆ. ಈಗ ಬೊಂಬಾಯಿಲಿ ಸೆಟ್ಲ್ ಆಯಿದವು. ಅವರ ಪಾಲುದಾರಕ್ಕೊ ಈಗಳೂ ಇದ್ದವಲ್ಲಿಯೇ !
ಶಾಹಿದು ಕಪೂರು ಎರಡು, ಪ್ರಿಯಾಂಕ ಚೋಪ್ರಾ ಒಂದು. ಒಟ್ಟು ಮೂರು ಜೆನ ಮುಖ್ಯಪಾತ್ರಲ್ಲಿ. ರೈಲು ಕಂಡಕ್ಟ್ರನ ಅಮಳು ಮಕ್ಕೊ ಇಬ್ರು ಅವರವರ ಸುಖಜೀವನದ ಕನಸು ಕಾಣ್ತಾ ಕಾಣ್ತಾ ಎಂತದೆಲ್ಲಾ ಎಡವಟ್ಟು ಮಾಡಿಗೊಂಡು. ಒಳ್ಳೆ ದಾರಿ ಹೇಳಿ ಅಲ್ಲದ ದಾರಿಗಳಲ್ಲಿ ಹೋಗಿಯೊಂಡು ಅಂತೂ ಒಂದು ಹದಕ್ಕೆ ಬಪ್ಪ ಕಥೆ. ಭಯಂಕರ ಪೆಟ್ಟು-ಗುಟ್ಟು ಇದ್ದು. ಇಷ್ಟು ಸಣ್ಣ ಬೆಡಿಂದ ಹಿಡುದು ಓ‌ಓ‌ಓ‌ಓ‌ಓ‌ಓ‌ಓ‌ಓ‌ಓ‌ಓ‌ಓ ಅಷ್ಟು ದೊಡ್ಡ ಬೆಡಿ ವರೆಗೆ ಎಲ್ಲವನ್ನೂ ತೋರ್ಸಿದ್ದವು. ಪಿಸ್ತೂಲು, ರಿವಾಲ್ವರು, ಸ್ಟೆನ್ ಮೆಷಿನ್ ಕಾರ್ಬೈನ್, ಎಸ್ ಎಲ್ ಆರ್, ಎಲ್ ಎಂ ಜಿ, ಮೆಷಿನ್ನು ಗನ್ನು.. ಇನ್ನು ಹೀಂಗೆ ಸುಮಾರು.
ಅರೆ.., ಮಾಣಿಗೆ ಹೇಂಗೆ ಗೊಂತು ಈ ಬೆಡಿ ಸಂಗತಿ? ಟೆರರಿಷ್ಟು ಗ್ರೂಪು ಮಿನಿ ಗೊಂತಿದ್ದೋ ಹೇಂಗೆ ಹೇಳಿ ತನಿಕೆ ಮಾಡೆಡಿ ಆತೋ ! ಆನು ಎನ್‌ಸಿಸಿಲಿತ್ತದಲ್ದಾ? ಕೇಂಪಿಂಗೆಲ್ಲಾ ಹೋಯ್ದೆ ಇದ. ಎನ್ನ ಬೆಟಾಲಿಯನ್ನಿಲಿ ಸಿ ಸರ್ಟಿಪಿಕೇಟು ಬಿ ಗ್ರೇಡಿಲಿ (ಎಲ್ಲೋರೂ ಸಿ ಗ್ರೇಡು, ಅದೂ ಭಾರೀ ಕಷ್ಟಲ್ಲಿ) ಪಾಸು ಮಾಡಿ ಕೊನೆಗೆ ಅದರದ್ದೇ ಕೋಟಲ್ಲಿ ಅಲ್ದೋ ಆನು ಎಂಎಸ್ಸಿಗೆ ಹೋದದ್ದು ('ಹೇಳಿಗೊಂಬದೂ' ಹೇಳಿ ಅಲ್ಲ, ಆದರೂ ಹೇಳುದು... ). ಹಾಂಗೆ ನೆಂಪಾತದ.
ಜೀವನ ಹೇಳಿರೆ ಹಾಂಗೆ ಅಲ್ದೋ? ಇದ್ದ ಹಾಂಗೆ ಇದ್ದರೆ ಅದರ ಮನುಷ್ಯ ಹೇಳುಗೋ ? ತಪ್ಪಾವ್ತು. ಅದರ ತಿದ್ದಿ ಸರಿ ಮಾಡಿಗೊಂಡು ಮುಂದೆ ಹೋಯೆಕ್ಕಲ್ಲದಾ? ನಮ್ಮ ತಪ್ಪಿಂದ ನಾವು ಬುದ್ದಿ ಕಲ್ತರೆ ಒಳ್ಳೆದು. ಒಪ್ಪಣ್ಣ ಹೇಳಿಗೊಂಡಿತ್ತಿದ್ದ, ಇನ್ನೊಬ್ಬರ ತಪ್ಪಿಂದ ಬುದ್ದಿ ಕಲಿವದು ಪೈಲಟ್ಟುಗೊ ಮಾಂತ್ರ ಹೇಳಿ.

Friday 12 June, 2009

ಲೊಳಲೊಟ್ಟೆ- ಭಾಗ ೨

ಒಪ್ಪಣ್ಣ ಅಂತೂ ಈ ಬ್ಲಾಗಿನ ವರೆಗೂ ತಂದು ಬಿಟ್ಟಿದ. ಊರಿಲಿಪ್ಪ ನಾಲ್ಕು ಜನಂಗೊಕ್ಕೆ ಹೇಳಿ ಶಿಫಾರಸ್ಸು ಬೇರೆ ಮಾಡ್ಸಿದ್ದ. ಅವ್ವೂದೇ ಆಚಕರೆ ಮಾಣಿ ಈಗ ಬರೆಗು, ಮತ್ತೆ ಬರೆಗು ಹೇಳಿ ತುದಿಕ್ಕಾಲಿಲಿ ಕೂದುಗೊಂಡು ಕಾಯ್ತಾ ಇದ್ದವಿದ. ಆನೂದೇ ಒಂದು ಹುಂಬತನಲ್ಲಿ ಒಪ್ಪಣ್ಣನ ಒತ್ತಾಯಕ್ಕೆ ಬರವಲೆ ಕೂದದ್ದೂ ಅಪ್ಪು. ಆದರೆ ಕೂದವಂಗೆ ಬರವಲೆ ಎಂತರ ಹೇಳಿಯೇ ಅರಡಿತ್ತಿಲ್ಲೆ ಹೇಳಿ ! ಎಂತರ ಮಾಡುದು ? ಹಾಂಗಾಗಿಯೇ ಆಚಕರೆ ಮಾಣಿ ಹೆರಟ್ಟದ್ದರ ಬಗ್ಗೆ ಈ ಎರಡನೇ ಪ್ರಸ್ತಾವನೆ..!
ಎಲಾ ಇವನ..ಬ್ಲೋಗು ಸ್ಟಾರ್ಟ್ ಮಾಡಿ ಬರವಲೆ ಎಡಿತ್ತಿಲ್ಲೆ ಹೇಳಿದರೆ ಎಂತ ಇದು ಸಮ ಇಪ್ಪದು ಆಪಾ ಹೇಳಿ ಕೇಳ್ತಿರಾ? ಒಂಚೂರು ಉದಾಸನ ಇದಾ..ಎಷ್ಟೂ ಹೇಳಿರೆ, ಒಪ್ಪಣ್ಣನ ಬತ್ತಿಗೊಕ್ಕೆ ಇತ್ಲಾಗೆ ಪಟಾಕಿ ಮಡುಗುವ ಹೇಳಿದರೂ ಬಿಡದ್ದಷ್ಟು. ಪುರುಸೊತ್ತೂ ಇಲ್ಲೆ ಬಿಡಿ..(ಫಿಲ್ಮ್ ನೋಡಿಗೊಂಡು ಕೂದರೂ, ಟಯರ್ ಬೆಳೆದರೂ ..). ಅದರಲ್ಲೂ ಪುಟ್ಟಕ್ಕ ಅಂತೂ ಬರೆಯದ್ದಕ್ಕೆ ಕ್ಲಾಸು ತೆಕ್ಕೊತ್ತಾ ಇದ್ದು.. 'ಬರೆ ಬರೆ' ಹೇಳಿ, ಞಂಕ್ಕು ಞ..ಛೇ ಎಂತಕ್ಕಾರೂ 'ಬರೆತ್ತೆ' ಹೇಳಿ ಹೆರಟನೋ. ಆನೋ ವಿಷಯಕ್ಕೆ ಒದ್ದಾಡ್ತಾ ಇದ್ದೆ..ಅವಕ್ಕೆ ಆಟ..ಎನಗೋ ಪ್ರಾಣ ಸಂಕಟ..
ಬರವದು ಹೇಳಿರೆ ಅದೆಂತಾ ಕಾಪಿ ಗೀಚಿದ ಹಾಂಗ? ಬರೆ ಆದರೆ ನಾಲ್ಕು ಎಳೆದಿಕ್ಕುಲಕ್ಕು..ಅಥವಾ ಬರೆ ಕಡುದಿಕ್ಕುಲಕ್ಕು.. ಆದರೆ ಈ ಬರವದು ಇದ್ದಲ್ದಾ..! ಕಷ್ಟ..ಕಷ್ಟ.
ಆದರೆ ಬರವಲೆ ಕೂದಪ್ಪಗ ಎಲ್ಲ ಒಂದೊಂದಾಗಿ ನೆಂಪಾವ್ತು. ಶಾಲೆ, ಕಾಲೇಜು ದಿನಂಗೊ, ನಂತರದ ಓಡಾಟಂಗೊ, ಒದ್ದಾಟಂಗೊ, ಮಾಣಿಗೆ ಅಯಾಚಿತವಾಗಿ ಉದ್ಯೋಗ ಸಿಕ್ಕಿದ್ದು, ಮದಲಾಣ ಹೆದರಿಕೆಗೊ ಎಲ್ಲಾ ಮಾಯ ಆಗಿ ಜೀವನಲ್ಲಿ ಒಂದು ರಜ್ಜ ಧೈರ್ಯ ಬಂದದು, ಹೀಂಗೆ...ಹೇಳುಲೆ ಹೋದರೆ ಪುರಾಣ ಬರವ ಮಟ್ಟಿಂಗೂ..ಈಗ ಎಲ್ಲಾ ಬ್ಲೋಗಿಲೂ ಹಾಂಗೆಯೇ ಅಲ್ದಾ? ಉದಿಯಪ್ಪಾಗ ಹೇತದ್ದರಿಂದ ಹಿಡಿದು ಇರುಳು ಉಚ್ಚೆ ಹೊಯ್ದು ಮನುಗುವ ವರೆಗೂ, ಕೆಲವೊಂದರಿ ಮನುಗಿದ ನಂತ್ರದ ಕನಸು, ಗೊರಕ್ಕೆಗೂ ಬ್ಲೋಗು ಹೇಳುದು ಒಂದು ಸ್ಟೇಷನ್ ಇದಾ..! ಆದರೂ ಎನಗೆ ಬರವಲೆ ವಿಷಯ ಸಿಕ್ಕುತ್ತಿಲ್ಲೆ ಹೇಳುದು ಮಾತ್ರ ನಿಂಗೊ ನಂಬೆಕ್ಕಾದ ಲೊಟ್ಟೆ ಅಲ್ಲದ ಲೊಟ್ಟೆ..
ಬಿ. ಎಸ್ಸಿ, ಎಮ್. ಎಸ್ಸಿ ಮುಗಿವವರೆಗೂ ಪೋಲಿ, ಪಟಿಂಗ, ಯಾವದಕ್ಕೂ ಆಗದ್ದವ ಹೇಳಿ ಒಂದು ಇಮೇಜ್ ಇತ್ತಿದ್ದ ಮಾಣಿ, ಫಕ್ಕನೆ ಛೇಂಜ್ ಆದದ್ದರ ಬಗ್ಗೆ ಸ್ವತಃ ಮಾಣಿಗೇ ಆಶ್ಚರ್ಯ! ಸಂಬಂಧಿಕರೆಲ್ಲಾ ಒಬ್ಬೊಬ್ಬರಾಗಿ ಹೀಂಗೊಬ್ಬ ಮಾಣಿ ಇದ್ದ ಆಚಕರೆಲಿ ಹೇಳಿ ಗುರ್ತ ಹಿಡಿವ ಮಟ್ಟಿಂಗೆ ಬೆಳದ್ದು ಹೇಳಿರೆ ಅದೊಂದು ಪವಾಡವೇ ಅಪ್ಪು! ಒಪ್ಪಣ್ಣ, ಒಪ್ಪಕ್ಕ, ಪುಟ್ಟಕ್ಕ, ಮಾಣಿಪ್ಪಾಡಿ ಅಪ್ಪಚ್ಚಿ, ಪಾಲಾರು ಅಪ್ಪಚ್ಚಿ, ಕುಂಞ ಮಾಂವ, ತಮ್ಮಣ್ಣಪ್ಪಚ್ಚಿ ಎಲ್ಲೋರೂ ಮಾಣಿಯ ಜೀವನಲ್ಲಿ ಒಂದಲ್ಲದ್ದರೊಂದು ರೀತಿಲಿ ಪ್ರಭಾವ ಬೀರಿದ್ದವು, ಮಾಣಿ ಉದ್ಧಾರ ಅಪ್ಪಲೆ ಕಾರಣ ಆಯಿದವು. ಹಾಂಗಾಗಿ ಮಾಣಿಗೆ ಸ್ವಂತ ಸಂಬಂಧಿಕರಿಂದಲೂ, ಫ್ರೆಂಡುಗಳೆ ಹೆಚ್ಚು ಹತ್ತರೆ.
ಹಾಂಗಾಗಿ ಎನ್ನ ಹಾಂಗೇ ಎನ್ನ ಬ್ಲೋಗೂ ಒಂಚೂರು ನಿಧಾನವೆ ಸರಿ ! ಆದರೂ ಪ್ರಧಾನ. ಹಾಂಗೆ ಹೇಳಿ, ಒಂಚೂರು ಸಮಾಧಾನ ಮಾಡಿಕ್ಕೊಂಡು ಹೋಯೆಕ್ಕದ. ಹೆಜ್ಜೆಲಿ ಬಿದ್ದ ನೆಣವಿನ ಹಾಂಗೆ ಹೇಳಿ ಹೇಳದ್ದೆ ಸಮಾಧಾನಲ್ಲಿ ತೆಕ್ಕೊಂಡು ಹೋಯೆಕ್ಕು, ಹಾಂಗೇಯೇ ನಿಧಾನ ಆದರೂ ಚೆಂದಲ್ಲಿ ಬರೆವ ಹುಮ್ಮಸ್ಸಿಲಿಪ್ಪ ಮಾಣಿಯ ಪ್ರೋತ್ಸಾಹಿಸೆಕ್ಕು ಹೇಳಿ ಈ ಮೂಲಕ ಕೇಳಿಕೊಂಬದಿದ...

ಓಹೋಯ್..ಕಾಂಬ ಹಾಂಗಾದ್ರೆ..

Wednesday 22 April, 2009

ಮಾಣಿ ಹೆರಟಿದ.........

ನಮಸ್ಕಾರ ಭಾವಂದ್ರೆ, ಅತ್ತಿಗೆಯಕ್ಕಳೆ........
ಹಿಂಗೊಂದು ಮರ್ಳು ಸುರು ಆಯಿದು ಎಂಗಳ ಒಪ್ಪಣ್ಣನ ನೋಡಿಕ್ಕಿ. ಅವ ಚೆಂದಕ್ಕೆ ಬರೆತ್ತ ಅವನ ಬ್ಲೋಗಿಲಿ ಹೇಳಿ ಆನುದೆ ಹೆರಟದು.... ಮದಲಿಂಗೆ ಒಂದು ಮೇರು ಲದ್ದಿ ಹಾಕುತ್ತೆ ಹೇಳಿಗೊಂಡು ಹೆರಟಿದಡ... ಹಂಗೆ ಎನ್ನ ಒಂದು ಪ್ರಯತ್ನ.... ಒಂಚೂರು ಸಪೋರ್ಟು ಬೇಕದ.....